Advertisement

ಆಲೂರು: ತಾಲ್ಲೂಕಿನ ಕಿರಗಡಲು ಹಾಗೂ ಹಂಪನಕುಪ್ಪೆ ಗ್ರಾಮಗಳಿಗೆ ಹೊಂದಿಕೊಂಡ ದೊಡ್ಡ ಕೆರೆ ಏರಿಯ ಬಳಿ ಟ್ರ್ಯಾಕ್ಟ‌ರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕಬ್ಬಿನಹಳ್ಳಿ ಗ್ರಾಮದ ಮಂಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಕಬ್ಬಿನಹಳ್ಳಿ ಗ್ರಾಮದ ಮೃತ ಮಂಜೇಗೌಡ (43)  ಜಮೀನು ಉಳುಮೆ ಮಾಡಿ ತನ್ನ ಮನೆಗೆ ಹಿಂದಿರುಗಿ ಬರುವ ಮಾರ್ಗ ಮಧ್ಯೆಇರುವ ಕಿರಗಡಲು ಹಾಗೂ ಹಂಪನೆಗುಪ್ಪೆ, ಗ್ರಾಮಗಳ ಮಧ್ಯೆ ಇರುವ ದೊಡ್ಡಕೇರಿ ಏರಿ ಮೇಲೆ ನಿಯಂತ್ರಣ ತಪ್ಪಿ ಸುಮಾರು ಹದಿನೈದು ಅಡಿ ಆಳದ ಗದ್ದೆಗೆ. ಟ್ಯಾಕ್ಟರ್ ಪಲ್ಟಿಯಾಗಿ ಬಿದ್ದ ಪರಿಣಾಮವಾಗಿ ಮಂಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಂಜೇಗೌಡನಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ. ಈ ಸಂಬಂಧ ಆಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *